ಟಂಟಂ ಪಲ್ಟಿ ಮಹಿಳೆ ಸಾವು.

Bagalkot,accident,news

ಟಂಟಂ ಪಲ್ಟಿ ಮಹಿಳೆ ಸಾವು.

ಟಂಟಂ ಪಲ್ಟಿ ಮಹಿಳೆ ಸಾವು.
ಬಾಗಲಕೋಟೆ:
ನಗರದ  ಹೊಳೆ ಆಂಜನೇಯ ದೇವಸ್ಥಾನದ ಮುಂಭಾಗ ಟಂಟಂ ವಾಹನ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತ ಮಹಿಳೆಯನ್ನು ಸೊಕನಾದಗಿಯ ಲಕ್ಷ್ಮವ್ವ ನಾರಾಯಣ ದಾಸರ(೫೫) ಗುರುತಿಸಲಾಗಿದೆ. ವಾಹನ ಚಾಲಕ ಲಕ್ಷ್ಮಣ ತನ್ನ ಸಹೋದರನ ಪತ್ನಿ ಪವಿತ್ರಾಳನ್ನು ಆಸ್ಪತ್ರೆಗೆ ತೋರಿಸಲು ತಾಯಿ ಲಕ್ಷ್ಮವ್ವಳೊಂದಿಗೆ  ಬಾಗಲಕೋಟೆಗೆ ಬಂದಿ ಮರಲಿ ಸೊಕನಾದಗಿಗೆ ತೆರಳುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಪವಿತ್ರಾ ದಾಸರ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ ಠಾಣೆಯ ಸಿಪಿಐ ಆರ್.ಎಸ್.ಬಿರಾದಾರ, ಪಿಎಸ್ ಐಗಳಾದ ಸೋಮಶೇಖರ್ ಗೌಡರ, ಎಸ್.ಜಿ.ಓತಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.