ಹೋಳಿ ಗಲಾಟೆ: ಜಿಲ್ಲೆಯಲ್ಲಿ ಎರಡು ಸಾವು..!

ಹೋಳಿ ಗಲಾಟೆ: ಜಿಲ್ಲೆಯಲ್ಲಿ ಎರಡು ಸಾವು..!
ಬಾಗಲಕೋಟೆ:
ಕ್ಷÄಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಅಪ್ರಾಪ್ತನೋರ್ವ ಚೂರಿ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ತೇರದಾಳದಲ್ಲಿ ನಡೆದಿದೆ. 

ರಾಹುಲ್ ಸಪ್ತಸಾಗರ(೧೯) ಮೃತ ದುರ್ದೈವಿ. ಈತನನ್ನು ೧೬ ವರ್ಷದ ಅಪ್ರಾಪ್ತ ಕೊಲೆಗೈದಿದ್ದು, ಆತನನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ. 
ಹೋಳಿ ಸಂದರ್ಭದಲ್ಲಿ ಮೃತ ರಾಹುಲ್ ಹಾಗೂ ಅಪ್ರಾಪ್ತನ ನಡುವೆ ಜಗಳ ಉಂಟಾಗಿದ್ದು, ತಾನು ರಾಹುಲ್‌ಗೆ ಹೊಡೆದಿರುವುದಾಗಿ ಅಪ್ರಾಪ್ತ ತನ್ನ ಗೆಳತಿ ಹಾಗೂ ಇತರ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದಾನೆ. ಈ ವಿಷಯ ರಾಹುಲ್‌ಗೆ ತಿಳಿದ ನಂತರ ರಾಹುಲ್ ಬಾಲಕನನ್ನು ವಿಚಾರಿಸಿದ್ದಾನೆ. ಆಗ ಮಾತಿಗೆ, ಮಾತು ಬೆಳೆದು ಅಪ್ರಾಪ್ತ ಬಾಲಕ ತನ್ನ ಬಳಿಯಿದ್ದ ಚೂರಿ ರೀತಿಯ ಆಯುದ್ಧದಿಂದ ರಾಹುಲ್‌ನ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಆಗ ಅಧಿಕ ರಕ್ತಸ್ರಾವ ಉಂಟಾಗಿ ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ. ಇಬ್ಬರೂ ಜೈನ ಸಮುದಾದಯವರಾಗಿದ್ದಾರೆ. 
ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಘಟನೆಗೆ ಬಳಸಿಸಿ ಆಯುಧವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. 
ಬಟ್ಟೆ ಹರಿದ ವಿಚಾರಕ್ಕೆ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಸಾವು..!

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ ಆಚರಣೆ ವೇಲೆ ಬಟ್ಟೆ ಹರಿದ ವಿಚಾರವಾಗಿ ನಡೆದಿದ್ದ ಗಲಾಟೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 
ಮಂಜುನಾಥ ಕೋಟೆಕಲ್(೩೬) ಮೃತ ದುರ್ದೈವಿ. ಮಾ.೭ರಂದು ಕಿಲ್ಲಾ ಓಣಿಯಲ್ಲಿ ಬಟ್ಟೆ ಹರಿದ ವಿಚಾರವಾಗಿ ಗಲಾಟೆ ಉಂಟಾಗಿತ್ತು. ಜಗಳದ ವೇಳೆ ತಳ್ಳಿದಾಗ ಮಂಜುನಾಥ ಕೆಳಗೆ ಬಿದ್ದಿದ್ದ. ನಂತರ ಆತನ ಸ್ಥಿತಿ ಗಂಭೀರಗೊAಡಾಗ ಹುಬ್ಬಳ್ಳಿ ಕಿಮ್ಸ್ಗೆ ಆತನನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬAಧ ಬಾಗಲಕೋಟೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತನಿಖೆ ಮುಂದವರಿಸಿದ್ದಾರೆ. 

ನಿಮ್ಮ ಮನೆಯ ಶುಭ ಸಮಾರಂಭಗಳಿಗಾಗಿ ನಮ್ಮನ್ನು ಸಂಪರ್ಕಿಸಿ