ಎಟಿಎಂ ಕಳ್ಳತನಕ್ಕೆ ಯತ್ನ: ಆರೋಪಿ ಬಂಧನ
ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನ, ಪಾನಶಾಪ್ವೊಂದಕ್ಕೆ ಕನ್ನ ಹಾಕಿದ್ದ ಕಳ್ಳನನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಮುರಾದಬಾದ ಜಿಲ್ಲೆಯ ಫರೀದಗಂಜ್ ಮೊಹಲ್ಲಾದ ಉಮರಿಕಲನ್ನ ಮೊಹ್ಮದಅಮೀರ್ ರಶೀದಹುಸೇನ(೨೭) ಬಂಧಿತ ಆರೋಪಿ.
ಡಿ.೧೫ರ ರವಿವಾರ ಬೆಳಗ್ಗೆ ೬.೩೦ಕ್ಕೆ ಈತ ನವನಗರದ ಜಿಲ್ಲಾಸ್ಪತ್ರೆ ಬಳಿ ಅನುಮಾನಸ್ಪದವಾಗಿ ಓಡಾಡುವುದನ್ನು ಕಂಡು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈತ ವಿದ್ಯಾಗಿರಿಯಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನಿಸಿದಲ್ಲದೇ ಹಾಕಿರುವುದಲ್ಲದೇ ಹಾಸ್ಟೇಲ್ ರಸ್ತೆಯಲ್ಲಿನ ಪಾನ್ಶಾಪ್ವೊಂದಕ್ಕೆ ಕನ್ನ ಹಾಕಿರುವುದನ್ನು ಒಪ್ಪಿಕೊಂಡಿದಲ್ಲದೇ ಕಳ್ಳತನ ಮಾಡುವುದಕ್ಕೆ ಜಿಲ್ಲಾಸ್ಪತ್ರೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿರುವ ವಿಚಾರವನ್ನೂ ಬಾಯಿಬಿಟ್ಟಿದ್ದಾನೆ.
ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್ಪಿ ವೈ.ಅಮರನಾಥ ರೆಡ್ಡಿ ಹಾಗೂ ಎಎಸ್ಪಿಗಳಾದ ಪ್ರಸನ್ನ ದೇಸಾಯಿ ಹಾಗೂ ಮಹಾಂತೇಶ್ವರ ಜಿದ್ದಿ ಅವರು ವಿಶೇಷ ಕಾರ್ಯಾಚರಣೆಗೆ ಸೂಚನೆ ನೀಡಿದ್ದು, ಅದರ ಬೆನ್ನಲ್ಲೇ ಕಳ್ಳರು ಒಬ್ಬೊಬ್ಬರಾಗಿ ಅಂದರ್ ಆಗುತ್ತಿದ್ದಾರೆ.
ಡಿವೈಎಸ್ಪಿ ಎಂ.ಕೆ.ಗAಗಲ ಅವರ ಮಾರ್ಗದರ್ಶನದಲ್ಲಿ ನವನಗರ ಸಿಪಿಐ ಆರ್.ಎಸ್.ಬಿರಾದಾರ, ಪಿಎಸ್ಐಗಳಾದ ಕುಮಾರ ಹಿತ್ತಲಮನಿ, ಎನ್.ಪಿ.ನಿಂಗನೂರ, ಸಿಬ್ಬಂದಿಗಳಾದ ಎಂ.ಎA.ಬೆಳ್ಳುಬ್ಬಿ, ಮಂಜುನಾಥ ಸಂಗೋದಿ, ಕೆ.ಎನ್.ದಂದರಗಿ, ಲಾಲ್ಸಾಬ್ ನದಾಫ್, ಜ್ಯೋತಿಬಾ ಮೈಗೂರ, ಲಕ್ಷö್ಮಣ ತೆಗ್ಗಿ, ಮುತ್ತು ಬಿಸನಾಳ, ಚಂದ್ರು ಜೆಟ್ಟಪ್ಪಗೋಳ, ಬಸವರಾಜ ಜಗುಲಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.


