ಸೆ.೩ ಸಿಎಂ ಯುಕೆಪಿ ಸಭೆ
ಸೆ.೩ ಸಿಎಂ ಯುಕೆಪಿ ಸಭೆ
ಬಾಗಲಕೋಟೆ;
ಕೃಷ್ಣಾ ಮೇಲ್ದಂಡೆ ಯೋಜನೆ ಭೂಮಿ ಬೆಲೆ ನಿಗದಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.೩ ರಂದು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುಕೆಪಿ ಹೋರಾಟ ಪ್ರಕಾಶ ಅಂತರಗೊಂಡ ಯೋಜನಾ ಪ್ರದೇಶದಲ್ಲಿ ಸರ್ಕಾರದ ನೋಂದಣಿ ಕಚೇರಿ ಮಾರ್ಗಸೂಚಿ ಪ್ರಸ್ತಾಪಿಸಬೇಕು, ಭೂಮಿಗೆ ಮಾರುಕಟ್ಟೆ ಬೆಂಬಲ ಬೆಲೆಯನ್ನು ನೀರಾವರಿಗೆ ೫೦ ಲಕ್ಷ, ಒಣ ಬೇಸಾಯಕ್ಕೆ ೪೦ ಲಕ್ಷ ರೂ ನೀಡಲು ಬೇಡಿಕೆ ಇಟ್ಟಿರುತ್ತೇವೆ, ಅದನ್ನೆಲ್ಲ ಮನದಲ್ಲಿಟ್ಟುಕೊಂಡು ಪರಿಹಾರ ಸೇರಿಸಿ ಬೆಲೆ ಘೋಷಿಸಬೇಕೆಂದರು, ಯೋಜನಾ ಭಾದಿತರಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಲ್ಲ ಪದವಿಗಳಲ್ಲಿ ( ಎಂಬಿಬಿಎಸ್,ಅಗ್ರಿ,ಇಂಜನೀಯರಿಂಗ್) ಪ್ರವೇಶಾರ್ಥಿಯಲ್ಲಿ ಶೇ.೨೦ ಹೆಚ್ಚುವರಿ ಪ್ರವೇಶ ಮೀಸಲಾತಿ ಒದಗಿಸಿ ಶಿಕ್ಷಣ ಶುಲ್ಕ, ಊಟ, ವಸತಿ ಶುಲ್ಕ ಒದಗಿಸಬೇಕು ಹಾಗೂ ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದೆ ಇಡಬೇಕಾಗಿದೆ ಎಂದು ಪ್ರಕಾಶ ಅಂತರಗೊಂಡ ತಿಳಿಸಿದ್ದಾರೆ.


