ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳು: ಡಾ.ವೀರಣ್ಣ ಚರಂತಿಮಠ

ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳು: ಡಾ.ವೀರಣ್ಣ ಚರಂತಿಮಠ

*ಸಜ್ಜಲಶ್ರೀ ನರ್ಸಿಂಗ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ

*ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ ಪ್ರದರ್ಶನ

ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳು: ಡಾ.ವೀರಣ್ಣ ಚರಂತಿಮಠ

ಬಾಗಲಕೋಟೆ:

ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತಿಕವಾಗಿದ್ದು, ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಅನ್ಯರಾಜ್ಯದ ಹಬ್ಬವನ್ನು ಕನ್ನಡದ ನೆಲದಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರು ಹೇಳಿದರು.
ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯ ಆವರಣದಲ್ಲಿ ಸೋಮವಾರ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಓಣಂ ಹಬ್ಬವು ವಿಶೇಷವಾಗಿ ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ, ಬಿ.ವಿ.ವಿ ಸಂಘದ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಓಣಂ ಹಬ್ಬದ ಆಚರಣೆಗೆ ಸಮಯದ ಅಭಾವದಿಂದ ಈ ವಿದ್ಯಾರ್ಥಿಗಳಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಾಗಲಕೋಟೆಯಲ್ಲೆ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಕೇರಳದ ಚಂಡಮದ್ದಳೆ ತಂಡ, ಬಾಣಸಿಗರ ತಂಡ ಮತ್ತು ಸ್ಥಬ್ದಚಿತ್ರಗಳು ನಮ್ಮ ಮೆಡಿಕಲ್ ಕಾಲೇಜಿಗೆ ಆಗಮಿಸಿ ಓಣಂ ಹಬ್ಬದ ಸಂಭ್ರವನ್ನು ಹೆಚ್ಚಿಸಿರುವರು. ಇಂಥ ಆಚರಣೆಗಳ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಿದಂತಾಗುತ್ತದೆ. ಅದೇರೀತಿ ಈ ನೆಲದ ಹಬ್ಬಗಳು ಮತ್ತು ರಾಜ್ಯೋತ್ಸವದ ಆಚರಣೆಯ ಮೂಲಕ ಅನ್ಯಭಾಷಿಕರಿಗೆ ಕನ್ನಡದ ವಿಶಿಷ್ಠತೆಯನ್ನು ಪರಿಚಯಿಸಲಾಗುತ್ತಿದೆ ಎಂದರು.

*ಗಮನ ಸೇಳೆದ ಚಂಡಮದ್ದಳೆ*  ಹಾಗೂ ಕೇರಳದ ವಿಶೇಷ ಖಾದ್ಯ: ಓಣಂ ಆಚರಣೆಯ ಉದ್ಘಾಟನೆಗೆ ಆಗಮಿಸಿದ ಅವರನ್ನು ಕೇರಳದ ಪಾರಂಪರಿಕ ವಾದ್ಯ ಚಂಡಮದ್ದಳೆ ನುಡಿಸುವುದರ ಮೂಲಕ ಸ್ವಾಗತಿಸಿದ್ದು ನೋಡುಗರ ಗಮನ ಸೆಳೆಯಿತು. ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಓಣಂ ನೃತ್ಯ ಪ್ರದರ್ಶಿಸಿದರು. ಮಹಾಬಲಿ ಮತ್ತು ಇನಸ್ಟಾಗ್ರಾಂ ನಲ್ಲಿ ಅತೀ ಹೆಚ್ಚು ವೀಕ್ಷಣೆಗಾಗಿ ಗಿನ್ನಿಸ್ ವಲ್ರ್ಡ ರೆಕಾರ್ಡ ಹೊಂದಿರುವ ಕಾವಾಡಿ ದ್ರುವಂ ಕಸ್ಮತಿ ಕಲಾವಿದರ ತಂಡದವರಿಂದ ಹಾಗೂ 500 ಜನ ವಿದ್ಯಾರ್ಥಿನಿಯರಿಂದ ಅದ್ದೂರಿ ಮೆರವಣಿಗೆಯು ಶಿವಾಲಯದಿಂದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದವರೆಗೆ ಜರುಗಿತು, ಕಾಲೇಜಿನ ಆವರಣದಲ್ಲಿ ಸ್ಥಬ್ದಚಿತ್ರಗಳು ಮತ್ತು ಚಂಡಮದ್ದಳೆ ಜೊತೆಗೆ ನೃತ್ಯ ಪ್ರದರ್ಶಿಸಿ, ಕೇರಳದ 24 ಪ್ರಕಾರದ ವಿವಿಧ ಓಣಂ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷರಾದ ಶ್ರೀ ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರಾದ ಮಹೇಶ ಅಂಗಡಿ, ಅಶೋಕ ಕಲ್ಯಾಣಶೆಟ್ಟರ, ಆಡಳಿತ ಮಂಡಳಿಯ ಸದಸ್ಯರಾದ ಡಾ.ಸುಭಾಶ ಪಾಟೀಲ, ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯರಾದ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಈಟ್ಟಿ ಮತ್ತು ಡಾ.ಪ್ರವೀಣ ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶ್ರೀನಿವಾಸ ವನಕಿ, ವೈದ್ಯಕೀಯ ಅಧೀಕ್ಷಕರಾದ ಡಾ.ಶ್ರೀರಾಮ ಕೋರಾ, ಫಿಜಿಯೋಥೆರಪಿ ಕಾಲೇಜಿನ ಮಹಾಂತೇಶ ಬಿರಡಿ ಮತ್ತು ಎಲ್ಲ ಆರೋಗ್ಯ ವಿಜ್ಞಾನ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನರ್ಸಿಂಗ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.