ವಿಸಿ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಹೋಮಕ್ಕೆ ಬುದ್ಧಿಜೀವಿಗಳ ಆಕ್ಷೇಪ 

ವಿಸಿ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಹೋಮಕ್ಕೆ ಬುದ್ಧಿಜೀವಿಗಳ ಆಕ್ಷೇಪ 

ಬಾಗಲಕೋಟೆ: 
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಅವರು ತಮ್ಮ ವಸತಿಗೃಹದಲ್ಲಿ ಸತ್ಯನಾರಾಯಣ ಪೂಜೆ, ಮಹಾಗಣಪತಿ ಪೂಜೆ ಹಾಗೂ ನವಗ್ರಹ ಶಾಂತಿ ಹೋಮ ನೆರವೇರಿಸಿರುವುದನ್ನು ಹಲವು ದಲಿತ ಸಂಘಟನೆಗಳು, ಬುದ್ಧಿಜೀವಿಗಳು ಆಕ್ಷೇಪಿಸಿದ್ದಾರೆ. 
ಜು.೧೧ರ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ವಿವಿ ಆವರಣದ ತಮ್ಮ ವಸತಿಗೃಹದಲ್ಲಿ ಪೂಜೆಗಳನ್ನು ನೆರವೇರಿಸಲಾಗುತ್ತಿದ್ದು, ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಕುಲಪತಿಗಳು ತಮ್ಮ ಲೆಟರ್ ಹೆಡ್‌ನಲ್ಲಿ ಆದೇಶಿಸಿದ್ದರು. ಆದರೆ ಕೆಲವರಿಂದ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಹೊರಡಿಸಿದ್ದ ಪತ್ರವನ್ನು ಹಿಂಪಡೆದರು. 

ಪೂಜಾ ಕಾರ್ಯಕ್ರಮ ನೆರವೇರಿಸುತ್ತಿರುವ ಬಗ್ಗೆ ಅವರ ಲೆಟರ್‌ಹೆಡ್ ವೈರಲ್ ಆಗುತ್ತಿದ್ದಂತೆ ಕಲಬುರಗಿ ಜಿಲ್ಲೆಯ ಹಲವು ದಲಿತ ಸಂಘಟನೆಗಳ ಮುಖಂಡರು ಆಕ್ಷೇಪಿಸಿದ್ದರು. ಕೆಲವರು ಕರೆ ಮಾಡಿಯೂ ವಿಷ್ಣುವರ್ಧನ್ ಅವರನ್ನು ಪ್ರಶ್ನಿಸಿದ್ದು, ನನ್ನ ಮನೆಯಲ್ಲಿ ಪೂಜೆ ನೆರವೇರಿಸುವುದಕ್ಕೂ ನನಗೆ ಧಾರ್ಮಿಕ ಸ್ವಾತಂತ್ರö್ಯವಿಲ್ಲವೇ ಎಂದು ವಿಷ್ಣುವರ್ಧನ್ ಅವರು ಕೇಳಿರು ಆಡಿಯೋಗಳು ವೈರಲ್ ಆಗಿವೆ. ಅವರು ತಮ್ಮ ಲೆಟರ್‌ಹೆಡ್‌ನಲ್ಲಿ ನೀಡಿದ ಆಮಂತ್ರಣ ಪತ್ರಿಕೆಯಲ್ಲೂ " ತಮ್ಮ ಪರಿವಾರದಿಂದ ಹಮ್ಮಿಕೊಂಡಿರುವ ಪೂಜಾ ಕಾರ್ಯಕ್ಕೆ ಆಹ್ವಾನ" ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ. 
ಈ ಬಗ್ಗೆ ಬುದ್ಧಿಜೀವಿಗಳು ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆದಿದ್ದು, ಕೂಡಲೇ ವಿಷ್ಣುವರ್ಧನ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. 

ಕುಲಪತಿ ಅವರ ವೈಯಕ್ತಿಕ ನಂಬಿಕೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ವಿವಿ ಲೆಟರ್‌ಹೆಡ್ ಬಳಸಿ ಎಲ್ಲರನ್ನು ಆಹ್ವಾನಿಸುವುದು ಖಂಡನೀಯ. ಭಾರತವು ಜಾತ್ಯತೀತ, ವಿಜ್ಞಾನ ಮನೋಭಾವದ ಪ್ರಜಾಸತ್ತಾತ್ಮಕ ರಾಷ್ಟçವಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಆತ್ಮೀಯವಾಗಿ ಆಹ್ವಾನಿಸುತ್ತಿರುವುದಾಗಿ ಕುಲಪತಿಗಳು ಹೇಳಿದರೂ ಮೇಲಾಧಿಕಾರಿಯ ಆಹ್ವಾನ ತಿರಸ್ಕರಿಸುವ ಧೈರ್ಯ ಅಧೀನ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಹೀಗಾಗಿ ಇದು ಹೇರಿಕೆ ಹಾಗೂ ಒತ್ತಡವಾಗುತ್ತದೆ ಎಂದು ದೂರಿದ್ದಾರೆ. 
ತೋಟಗಾರಿಕೆಯಂಥ ವೈಜ್ಞಾನಿ  ವಿಷಯ ಕಲಿಸುವ ವಿಶ್ವವಿದ್ಯಾಲಯದ ಕುಲಪತಿಗಳೇ ನವಗ್ರಹ ಶಾಂತಿ ಹೋಮದಂಥ ಆಚರಣೆಯನ್ನು ಅಧಿಕೃತವಾಗಿ ನಡೆಸಿದರೆ ವಿವಿಯ ವೈಜ್ಞಾನಿಕ ಮೌಲ್ಯ ಹಾಗೂ ವಿದ್ಯಾರ್ಥಿಗಳಲ್ಲಿ ಮೂಡಬೇಕಾದ ವೈಜ್ಞಾನಿಕ ಮನೋಭಾವಕ್ಕೆ ಹೊಡೆತ ಬೀಳುತ್ತದೆ ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ, ಸಾಹಿತಿ ಬಸವರಾಜ ಸೂಳಿಭಾವಿ, ದಲಿತ ಸಂಘಟನೆ ಮುಖಂಡ ಅನಿಲ ಹೊಸಮನಿ, ಸಾಹಿತಿಗಳಾದ ಡಾ.ಎಚ್.ಎಸ್.ಅನುಪಮಾ, ಕೆ.ಪಿ.ಸುರೇಶ, ಚಂದ್ರಕಾAತ ವಡ್ಡು ಅವರುಗಳು ಆಕ್ಷೇಪಿಸಿದ್ದಾರೆ.