ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ: ನಗರದ ಶ್ರೀಮಠಗಳಲ್ಲಿ ಕಾರ್ಯಕ್ರಮ 

ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ: ನಗರದ ಶ್ರೀಮಠಗಳಲ್ಲಿ ಕಾರ್ಯಕ್ರಮ 

ಬಾಗಲಕೋಟೆ: 
ಶ್ರೀರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವದ ಪ್ರಯುಕ್ತ ನಗರದ ವಿವಿಧ ಮಠಗಳಲ್ಲಿ ಆ.೨೯ ರಿಂದ ಆ.೩೧ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 
ಕಿಲ್ಲಾ ಓಣಿಯ ಶ್ರೀನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠ, ನಾಗಸಂಪಿಗೆ ಅವರ ಪರಿವಾರದ ಶ್ರೀರಾಯರ ಮಠ ಹಾಗೂ ನವನಗರದಲ್ಲಿರುವ ಶ್ರೀಶಾಮಾಚಾರ್ಯ ಇಂಗಳೆ ಅವರ ರಾಯರ ಮಠದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜೆ, ರಾಯರ ಬೃಂದಾವನಕ್ಕೆ ಅಲಂಕಾರ, ತೀರ್ಥ-ಪ್ರಸಾದ ವಿನಿಮಯ ಕಾರ್ಯಕ್ರಮಗಳು ಜರುಗಲಿವೆ. 

. ಕಿಲ್ಲಾ ರಾಯರ ಮಠದಲ್ಲಿ ಶುಕ್ರವಾರ ಸಂಜೆ ಕೂಡ್ಲಿ ಆರ್ಯ ಅಕ್ಷೆÆÃಭ್ಯತೀರ್ಥ ಮಠಾಧೀಶರಾದ ಶ್ರೀರಘುವಿಜಯತೀರ್ಥ ಶ್ರೀಪಾದಂಗಳವರು ಧಾನ್ಯ ಪೂಜೆಯನ್ನು ನೆರವೇರಿಸಿ ರಾಯರ ಮಹಿಮೆ ಕುರಿತಾಗಿ ಪ್ರಚನ ನೀಡಿದರು. 
ಕಿಲ್ಲಾ ರಾಯರ ಮಠದಲ್ಲಿ ಪ್ರತಿದಿನ ಬೆಳಗ್ಗೆ ೫ಕ್ಕೆ ಸುಪ್ರಭಾತ, ೫.೩೦ಕ್ಕೆ ನಿರ್ಮಾಲ್ಯ ವಿಸರ್ಜನೆ, ೭ ಗಂಟೆಗೆ ಅಷ್ಟೋತ್ತರ ಪಾರಾಯಣ, ೮ಗಂಟೆಗೆ ಪಂಚಾಮೃತ ಅಭಿಷೇಕ, ೧೦ ಗಂಟೆಗೆ ಅರ್ಚನೆ, ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ನೈವೇದ್ಯ, ಅಲಂಕಾರ ಪೂಜೆ, ಹಸ್ತೋದಕ ಹಾಗೂ ಮಹಾಮಂಗಳಾರತಿ ಜರುಗಲಿದ್ದು, ಮಧ್ಯಾಹ್ನ ೧.೩೦ಕ್ಕೆ ತೀರ್ಥಪ್ರಸಾದ ವಿರಲಿದೆ. ಸಂಜೆ ೭ಕ್ಕೆ ಸ್ವಸ್ತಿ ವಾಚನ, ಮಹಾಮಂಗಳಾರತಿ ಜರುಗುವುದು ಎಂದು ಶ್ರೀಮಠದ ವಿಚಾರಣಾಕರ್ತ ನಾರಾಯಣ ದೇಸಾಯಿ, ವ್ಯವಸ್ಥಾಪಕ ನಾರಾಯಣ ತಾಸಗಾಂವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿದಿನ ಬೆಳಗ್ಗೆ ೬ಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ೯ ಗಂಟೆಗೆ ಸಾಮೂಹಿಕ ಅಷ್ಟೋತ್ತರ, ಮಧ್ಯಾಹ್ನ ೧ ಗಂಟೆಗೆ ಮಹಾನೈವೇದ್ಯ, ಅಲಂಕಾರ, ಹಸ್ತೋಕ, ತೀರ್ಥಪ್ರಸಾದ ವಿರಲಿದೆ. ಆ.೨೯ ರಂದು ಸಂಜೆ ೬ಕ್ಕೆ ಪರಿಮಳಾ ಗಿರಿಯಾಚಾರ ಅವರಿಂದ ದಾಸವಾಣಿ, ಆ.೩೦ ರಂದು ಸಂಜೆ ೭ಕ್ಕೆ ನಟರಾಜ ನೃತ್ಯ ನಿಕೇತನ ತಂಡದ ನೃತ್ಯ, ಆ.೩೧ರಂದು ಸಂಜೆ ೬ಕ್ಕೆ ರುಕ್ಮಿಣಿ ಭಜನಾ ಮಂಡಳಿಯಿAದ ಭಜನೆ, ನಂತರ ೬.೩೦ಕ್ಕೆ ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಗುತ್ತದೆ. ಎಂದು ಸಂಘದ ಕಾರ್ಯಾಧ್ಯಕ್ಷ ಜಿ.ಆರ್.ದೇಶಪಾಂಡೆ, ಶ್ರೀಮಠದ ಅರ್ಚಕ ಅರವಿಂದಾಚಾರ್ಯ ಕಟ್ಟಿ ತಿಳಿಸಿದ್ದಾರೆ. 

ವಿದ್ಯಾಗಿರಿಯ ೭ನೇ ರಸ್ತೆಯ ನಾಗಸಂಪಿಗೆ ಅವರ ರಾಯರಮಠದಲ್ಲೂ ಮೂರುದಿನಗಳ ಕಾಲ ವಿಶೇಷ ಪೂಜೆ, ಮಧ್ಯಾಹ್ನ ತೀರ್ಥಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ, ಪಂ.ವಿಜಯೇAದ್ರಾಚಾರ್ಯ ನಾಗಸಂಪಿಗೆ ಕೋರಿದ್ದಾರೆ. 
ನವನಗರದ ೫೬ನೇ ಸೆಕ್ಟರ್‌ನ ಮಠದಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು, ರಾಯರ ಸೇವೆ ಇರಲಿದೆ ಎಂದು ಶಾಮಾಚಾರ್ಯ ಇಂಗಳೆ, ವಾದಿರಾಜಾಚಾರ್ಯ ಇಂಗಳೆ ತಿಳಿಸಿದ್ದಾರೆ.