ನಡುಗಡ್ಡೆ ಸ್ಥಳಾಂತರ ಸಚಿವರೊಂದಿಗೆ ಮಹತ್ವದ ಚರ್ಚೆ 

ನಡುಗಡ್ಡೆ ಸ್ಥಳಾಂತರ ಸಚಿವರೊಂದಿಗೆ ಮಹತ್ವದ ಚರ್ಚೆ 

ಬಾಗಲಕೋಟೆ: 
ನಗರದಲ್ಲಿ ಮುಳುಗಡೆ ಆಗದೆ ಉಳಿಯುವ ನಡುಗಡ್ಡೆ ಪ್ರದೇಶದ ಸ್ಥಳಾಂತರಕ್ಕೆ ಸಂಬAಧಿಸಿದAತೆ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಿಟಿಡಿಎ  ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಚರ್ಚೆ ನಡೆಸಿದರು. 

ಕಿಲ್ಲಾ, ಜೈನಪೇಟೆ, ಹಳಪೇಟೆಯ ಹಲವು ಪ್ರದೇಶಗಳು ನಡುಗಡ್ಡೆಯಾಗಿ ಉಳಿಯುತ್ತವೆ. ಅಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಅವುಗಳ ಸ್ಥಳಾಂತರಕ್ಕೆ ಕ್ರಮವಹಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಅವಧಿಯಲ್ಲಿ ಒತ್ತು ಸಿಗುವ ಆಶಾಭಾವನೆಯಿದೆ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವರಿಕೆ ಮಾಡಿಕೊಟ್ಟರು. 
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಕಾನೂನು ಹಾಗೂ ನಿಯಮಗಳ ತೊಡಕುಗಳಿವೆ. ಅವುಗಳ ತಿದ್ದುಪಡೆ ಮಾಡಲು ಹೊಸ ಕಾಯ್ದೆಯಲ್ಲಿ ಮಾರ್ಪಾಡುಗಳನ್ನು ಮಾಡಬೇಕು. ಬೈಲಾ ತಿದ್ದುಪಡಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಕೂಡಲೇ ಮಂಜೂರು ಮಾಡಬೇಕೆಂದು ವಿನಂತಿಸಿದರು. 
ಬಾಗಲಕೋಟೆ ನಗರದ ವ್ಯಾಪಾರಸ್ಥರ ಬೇಡಿಕೆಯಂತೆ ನವನಗರದ ಮೂರನೇ ಯೂನಿಟ್‌ನಲ್ಲಿ ೨೦೦ ಎಕರೆ ಪ್ರದೇಶವನ್ನು ಮಾರುಕಟ್ಟೆಗಾಗಿ ಮೀಸಲಿಡಲು ಮಂಜೂರಾತಿ ನೀಡಬೇಕು. ಸಂತ್ರಸ್ತರಿಗೆ ಕೆಲಸ ಕಾರ್ಯಗಳು ವಿಳಂಬವಾಗದAತೆ ಸಹಕರಿಸುವಂತೆ ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಇದ್ದರು.