ಟೀಕಾಕಾರರನ್ನು ಬೈಯ್ಯುತ್ತಲೇ ಸಿಟ್ಟು ತ್ಯಾಗ ಮಾಡುವುದಾಗಿ ಘೋಷಿಸಿದ ಕಾಶಪ್ಪನವರ..!

ಟೀಕಾಕಾರರನ್ನು ಬೈಯ್ಯುತ್ತಲೇ ಸಿಟ್ಟು ತ್ಯಾಗ ಮಾಡುವುದಾಗಿ ಘೋಷಿಸಿದ ಕಾಶಪ್ಪನವರ..!

(Advt)

ಬಾಗಲಕೋಟೆ:
ಡಿಕೆಶಿ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ತಮ್ಮ ಟೀಕಾಕಾರರನ್ನು ತರಾಟೆಗೆ‌ ತೆಗೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕ್ಷೇತ್ರದ ಜನರಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಸಚಿವನಾಗ್ತಿನಿ ಎಂದು ಗೊತ್ತಾದ್ಮೇಲೆ ಟಿವಿ, ಫೇಸ್ಬುಕ್, ಇನ್ ಸ್ಟಾಗ್ರಾಂನಲ್ಲಿ ಆಡಿಯೋಗಳನ್ನ ಹರಿಬಿಟ್ಟಿದ್ದಾರೆ.‌ದುಶ್ಮನ್ ಕಹಾ ಹೈ ಎಂದರೆ ಬಗಲಿನಲ್ಲಿ ಇರುತ್ತಾರೆ.‌ಇನ್ನು ಮುಂದೆ ಇಂಥದಕ್ಕೆಲ್ಲ ಉತ್ತರಿಸಲ್ಲ. ನನ್ನ ನಂಬಿ ಇಂಥದೊಂದು ಸ್ಥಾನ ನೀಡಲಾಗಿದೆ. ಇನ್ಮು ಮುಂದೆ ಸಿಟ್ಟು ತ್ಯಾಗ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.