ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ಬಾಗಲಕೋಟೆ : ಜಿಲ್ಲೆಯಾದ್ಯಂತ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಗಸ್ಟ 27 ರಿಂದ ಸೆಪ್ಟೆಂಬರ 16 ವರೆಗೆ ಮದ್ಯಪಾನಿಯಗಳ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಸಂಗಪ್ಪ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ ತಾಲೂಕಿನಾದ್ಯಂತ ಆಗಸ್ಟ 26ರ ಮಧ್ಯರಾತ್ರಿಯಿಂದ 28ರ ಬೆಳಿಗ್ಗೆ 6 ಗಂಟೆವರೆಗೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆವರೆಗೆ, ಸೆ.1 ರ ಮಧ್ಯರಾತ್ರಿಯಿಂದ ಸೆ.3ರ ಬೆಳಿಗ್ಗೆ 6 ಗಂಟೆವರೆಗೆ ಸೆ.3ರ ಮಧ್ಯರಾತ್ರಿಯಿಂದ ಸೆ.5 ಬೆಳಿಗ್ಗೆ 6 ಗಂಟೆವರೆಗೆ, ಬೀಳಗಿ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.5 ಬೆಳಿಗ್ಗೆ 6 ಗಂಟೆ, ಸೆ.5ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆ ಹಾಗೂ ಸೆ.15ರ ಮಧ್ಯರಾತ್ರಿಯಿಂದ ಸೆ.17 ಬೆಳಿಗ್ಗೆ 6 ಗಂಟೆವರೆಗೆ ನಿಷೇಧಿಸಲಾಗಿದೆ.
ಹುನಗುಂದ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.5 ಬೆಳಿಗ್ಗೆ 6 ಗಂಟೆ, ಸೆ.5ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆ, ಇಲಕಲ್ಲ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.5ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆ, ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆವರೆಗೆ.
ಜಮಖಂಡಿ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 28 ಬೆಳಿಗ್ಗೆ 6 ಗಂಟೆ, ಆ.30 ಮಧ್ಯರಾತ್ರಿಯಿಂದ 31 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.2 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.4 ಬೆಳಿಗ್ಗೆ 6 ಗಂಟೆ, ಸೆ.5ರ ಮಧ್ಯರಾತ್ರಿಯಿಂದ ಸೆ.6 ಬೆಳಿಗ್ಗೆ 6 ಗಂಟೆ, ರಬಕವಿ-ಬನಹಟ್ಟಿ & ತೇರದಾಳ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ 30 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ 31 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.5 ಬೆಳಿಗ್ಗೆ 6 ಗಂಟೆ, ಸೆ.5ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆ ಹಾಗೂ ಸೆ.7 ಮಧ್ಯರಾತ್ರಿಯಿಂದ ಸೆ.9 ಬೆಳಿಗ್ಗೆ 6 ಗಂಟೆವರೆಗೆ.
ಮುಧೋಳ ತಾಲೂಕಿನಾದ್ಯಂತ ಆ.26ರ ಮಧ್ಯರಾತ್ರಿಯಿಂದ ಆ.28 ಬೆಳಿಗ್ಗೆ 6 ಗಂಟೆ, ಆ.30ರ ಮಧ್ಯರಾತ್ರಿಯಿಂದ ಸೆ.1 ಬೆಳಿಗ್ಗೆ 6 ಗಂಟೆ, ಸೆ.1ರ ಮಧ್ಯರಾತ್ರಿಯಿಂದ ಸೆ.3 ಬೆಳಿಗ್ಗೆ 6 ಗಂಟೆ, ಸೆ.3ರ ಮಧ್ಯರಾತ್ರಿಯಿಂದ ಸೆ.7 ಬೆಳಿಗ್ಗೆ 6 ಗಂಟೆ ಹಾಗೂ ಸೆ.7ರ ಮಧ್ಯರಾತ್ರಿಯಿಂದ ಸೆ.9 ಬೆಳಿಗ್ಗೆ 6 ಗಂಟೆವರೆಗೆ ನಿಷೇಧಿಸಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದಲ್ಲಿ ಅಬಕಾರಿ ಕಾಯ್ದೆ 1965ರಡಿ 6 ತಿಂಗಳುಗಳಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರದಿಂದ 50 ಸಾವಿರ ರೂ.ಗಳ ವರೆಗೆ ದಂಡವಿಧಿಸಲಾಗುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ 2023 ರಡಿ ಸಾರ್ವಜನಿಕ ಶಾಂತಿಭಂಗ ಅಥವಾ ಅಧಿಕಾರಿಗಳ ಆದೇಶ ಉಲ್ಲಂಘಿಸಿದರೆ 1 ವರ್ಷವರೆಗೆ ಜೈಲು ಶಿಕ್ಷೆ ಮತ್ತು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಪವಿಭಾಗಾಧಿಕಾರಿಗಳು, ಜಿಲ್ಲಾ ಅಬಕಾರಿ ಅಧಿಕಾರಿಗಳು, ತಹಶೀಲ್ದಾರರು ಮತ್ತು ಸ್ಥಳೀಯ ಪೊಲಿಸ್ ಠಾಣೆಯ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆದೇಶದಲ್ಲಿ ತಿಳಿಸಿದ್ದಾರೆ.


